Saturday, September 5, 2009

ಜೀವನವೆಂಬ ಇಸ್ಪೀಟು ಆಟ!


ಬುದ್ದಿ ಜೀವಿಗಳು ಜೀವನವನ್ನು ತುಂಬಾ ಆಟಗಳಿಗೆ ಹೋಲಿಸುತ್ತಾರೆ, ಅವುಗಳಲ್ಲಿ ಚಂದುರಂಗದಾಟ ಮುಖ್ಯವಾದದ್ದು. ನನಗೆ ಚದುರಂಗದಾಟದ ಬಗ್ಗೆ ಏನು ತಿಳಿಯದ ಕಾರಣ, ನನಗೆ ಆ ಹೋಲಿಕೆಗಳು ಅರ್ಥ ಆಗೋದು ಅಷ್ಟಕ್ಕೆ ಅಸ್ಟೆ. ಹಾಗಾಗಿ ನನಗೆ ತಿಳಿದಿರುವ, ನನಗೆ ಸರಿಯಾಗಿ ಅರ್ಥ ಆಗುವ "ಇಸ್ಪೀಟು" ಆಟಕ್ಕೆ ಜೀವನವನ್ನು ಹೋಲಿಕೆ ಮಾಡಿಕೊಂಡು ಅರ್ಥ ಮಾಡಿಕೊಳ್ಳೋದು ನನ್ನ ಅಭ್ಯಾಸ.

ನಾವುಗಳೆಲ್ಲಾ ಈ ಪ್ರಪಂಚಕ್ಕೆ ಕಾಲಿಟ್ಟಾಗ, ನಮ್ಮ ಜೀವನದ ಆಟಕ್ಕೆ ಬೇಕಾಗುವಸ್ಟು "ಇಸ್ಪೀಟು ಎಲೆ"ಗಳನ್ನೂ ದೇವರು (ಯಾರು ಅಂಥ ಇನ್ನು ಸರಿಯಾಗಿ ತಿಳಿದಿಲ್ಲಾ, ಹುಡುಕಾಟ ಇನ್ನು ನನ್ನೊಳಗೆ ನಡೆಯುತ್ತಿದೆ) ಕೊಟ್ಟು ಕಳಿಸಿರುತ್ತಾನೆ. ಅವುಗಳಲ್ಲಿ ತುಂಬಾ "ಜೋಕರ್"ಗಳು ಕೂಡ ಇರುತ್ತವೆ. ಜೊತೆಗೆ ಬೇಕಾದಾಗ ಒಂದೊಂದಾಗಿ ನಮ್ಮ ಸರತಿ ಬಂದಾಗ ತೆಗೆದು ಕೊಳ್ಳಲು ತುಂಬಾ ಎಲೆಗಳನ್ನು ಆಟಗಾರರ ನಡುವೆ ಈ ಪ್ರಪಂಚದಲ್ಲಿ ಇಟ್ಟಿರುತ್ತಾನೆ, ಇದರಲ್ಲಿ ಕೂಡ "ಜೋಕರ್"ಗಳು ಸಿಗಬಹುದು.

ಮಾನವನ ಜೀವನ ಕೇವಲ ಈ ಎಲೆಗಳನ್ನು ಸರಿಯಾಗಿ ಕೂಡಿಸಿಕೊಂಡು ಆಡುವ ಆಟ. ನಾವು ಚಿಕ್ಕವರಾಗಿದ್ದಾಗ ದೇವರು ನಮ್ಮ ಅಪ್ಪ-ಅಮ್ಮ-ಗುರುಗಳ ರೂಪದಲ್ಲಿ ನಮಗೋಸ್ಕರ ಆಟ ಆಡಿಸಿ ತೋರಿಸಿ ಕೊಡುತ್ತಾನೆ, ಒಮ್ಮೆ ನಮಗೆ ನಿರ್ಧಾರ ಮಾಡುವ ಶಕ್ತಿ ಬಂದ ತಕ್ಷಣ ಎಲ್ಲಾ ಎಲೆಗಳನ್ನು ನಮ್ಮ ಕೈಗೆ ಕೊಟ್ಟು ಆಟ ಮುಂದುವರಿಸಲು ಹೇಳಿ ಹೋಗ್ತಾನೆ. ತದ ನಂತರ ನಮ್ಮ ಜೀವನದಲ್ಲಿ ಏನೇ ಏರು-ಪೆರು ಆದರೂ ಅದಕ್ಕೆ ನಾವುಗಳೇ ನೇರ ಹೊಣೆ. ನಾವುಗಳು ಯಾವುದೂ ಜೋಕರ್, ಯಾವುದು ಸಾಮನ್ಯ ಎಲೆ ಅಂಥ ನಿರ್ಧಾರ ಮಾಡಿಕೊಂಡು ಅವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಬೇಕು, ಅದುವೇ ಜೀವನದಲ್ಲಿ ಸಂತೋಷವಾಗಿರಲು ಬೇಕಾಗಿರುವ ಮೂಲ ಮಂತ್ರ. ನಮ್ಮ ಜೀವನದಲ್ಲಿ ಜೊತೆಗೆ ಆಡುವವರು ಕೇವಲ ಅವರಿಗೆ ಬೇಕಿಲ್ಲದ ಎಲೆಗಳನ್ನು ನಿಮ್ಮತ್ತ ಎಸೆಯುತ್ತಿರುತ್ತಾರೆ. ಕೆಲವೋಮ್ಮೆ ನಿಮಗೆ ಬೇಕಾದ ಎಲೆ ಸಿಗಬಹುದು ಮತ್ತೆ ಕೆಲವೋಮ್ಮೆ ಸಿಗದೇ ಕೂಡ ಇರಬಹುದು, ಮತ್ತೆ ಕೆಲವರು ತಿಳಿಯದೆ ನಿಮಗೆ ಬೇಕಾದ ಎಲೆಗನ್ನೇ ಎಸೆಯಬಹುದು, ಅದೆಲ್ಲಾ ಕೇವಲ ನಿಮ್ಮ "ಲಕ್" ಮೇಲೆ ನಿರ್ಣಯ ಆಗ್ತದೆ. ಅವರುಗಳು ನಿಮಗೆ ಎಸೆದ ತಕ್ಷಣ ಆ ಎಳೆಯನ್ನು ನೀವು ತೆಗೆದುಕೊಳ್ಳಲೇಬೇಕು ಎಂದೆನಿಲ್ಲಾ. ನಿಮಗೆ ಆ ಎಲೆ ಬೇಕಿಲ್ಲದಿದ್ದಲ್ಲಿ, ಆಟಗಾರರ ಮಧ್ಯೆ ಇರುವ ಕಂತೆಯಿಂದ ಒಂದು ಎಲೆ ತೆಗೆದು ನಿಮ್ಮ ಹಣೆಬರಹ ಪರೀಕ್ಷೆ ಮಾಡಿಕೊಳ್ಳಬಹುದು. ಇದೆಲ್ಲಾದರ ಜೊತೆಗೆ ನೀವು ಕೂಡ ಸರಿಯಾಗಿ ಯೋಚನೆ ಮಾಡಿ ಯಾವುದು ಎಲೆ ನಿಮಗೆ ಸರಿಯಾಗಿ ಕೂಡಿ ಬರಲ್ಲ, ಆ ಎಲೆಯನ್ನು ಬೇರೆಯವರ ಕಡೆ ಎಸೆಯಲೇ ಬೇಕು, ಇಲ್ಲಿ ನಿಮ್ಮ ಬುದ್ದಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲೇ ಬೇಕು, ಇಲ್ಲದಿದ್ದರೆ ಆಟದಲ್ಲಿ ಗೆಲುವು ಸಿಗೋದು ಕಷ್ಟ.

ಯಾವ ಆಟವನ್ನು (ಇಸ್ಪೀಟ್ ಆಟದಲ್ಲೇ ತುಂಬಾ ವಿಧಗಳಿವೆ), ಯಾವ ರೀತಿಯಲ್ಲಿ, ಯಾವ ಎಲೆಗಳನ್ನು ಕೂಡಿಸಿ ಆಡುತ್ತಾರೆ ಅನ್ನೋದು ಅವರವರ ವಿವೇಕತೆಗೆ ಬಿಟ್ಟ ವಿಷಯ. ಕೆಲವರು ಎಲ್ಲಾ "ಜೋಕರ್" ಎಲೆಗಳನ್ನು ಜೀವನದ ಪ್ರಥಮ ಹಂತದಲ್ಲೇ ಉಪಯೋಗಿಸಿ ಕೊನೆಗೆ ಆಟ ಮುಗಿಯುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಕೆಲವರು ಎಲ್ಲಾ "ಜೋಕರ್"ಗಳನ್ನೂ ಕೊನೆವರೆಗೆ ಉಳಿಸಿಕೊಳ್ಳುವುದರಲ್ಲೇ ಜೀವನ ವ್ಯರ್ಥ ಮಾಡುತ್ತಾರೆ ಹಾಗೂ ಕೊನೆಗೆ ಕೇವಲ "ಜೋಕರ್"ಗಳನ್ನೇ ಉಳಿಸಿಕೊಂಡು, ಒಟ್ಟಿಗೆ ಉಪಯೋಗಿಸಿ, ಆಟದ ನಿಜವಾದ ಮಜಲನ್ನೇ ಅನುಭವಿಸದೇ ಹೊರಟು ಹೋಗುತ್ತಾರೆ. ಇನ್ನೂ ಕೆಲವರು ಈ "ಜೋಕರ್"ಗಳ ಮಹತ್ವ ತಿಳಿಯದೆ ಬೇರೆ ಎಲೆಗಳ ತರಾನೆ ಉಪಯೋಗಿಸಿ, "ಜೋಕರ್"ಗಳನ್ನೂ ವ್ಯರ್ಥ ಮಾಡುತ್ತಾರೆ. ಯಾರು ಈ "ಜೋಕರ್"ಗಳ ಮಹತ್ವ ತಿಳಿದು, ಜೊತೆಗೆ ಸಾಮನ್ಯ ಎಲೆಗಳನ್ನು ಕೂಡ ಸರಿಯಾಗಿ ಕೂಡಿಸಿ ಆಡುತ್ತಾರೋ ಅವರುಗಳು ಮಾತ್ರ ಈ ಆಟದಲ್ಲಿ ಗೆಲ್ಲಲು ಸಾಧ್ಯ.

ಜೀವನದ ಈ ಆಟದಲ್ಲಿ ನಿಮಗೆ ಗೆಲ್ಲಲಾಗದಿದ್ದರೆ ಅದಕ್ಕೆ ನೀವೇ ನೇರ ಹೊಣೆ. ಬೇರೆ ಯಾರನ್ನು ದೂಷಿಸಲಾಗುವುದಿಲ್ಲ. ಏಕೆಂದರೆ ಎಲ್ಲಾರು ಅವರವರ ಆಟವನ್ನು ಆಡುವುದರಲ್ಲಿಯೇ ಮನಸ್ಸನ್ನು ಕೇಂದ್ರಿಕರಿಸಿರುತ್ತಾರೆ. ನನ್ನ ಜೀವನದಲ್ಲಿ ಅವನಿಂದ ಈಗೆ ಆಯಿತು ಮತ್ತೆ ಇವನಿಂದ ಈಗೆ ಆಯಿತು ಎಂದು ಸಬೂಬು ಕೊಡುವ ತುಂಬ ಜನರನ್ನು ನೋಡಿದ್ದೇನೆ, ಅವರುಗಳಿಗೆಲ್ಲ ನನ್ನ ಚಿಕ್ಕ ಪ್ರಶ್ನೆ : ಅವರು ಎಸೆದ ಎಲೆಗಳನ್ನು ಯೋಚನೆ ಮಾಡದೇ ತೆಗೆದುಕೊಂಡು ಮಾಡಿದ ತಪ್ಪು ನಿಮ್ಮದೇ ತಾನೆ?. ಹಾಗಾಗಿ ಜೀವನದಲ್ಲಿ ನಮ್ಮ ಸೋಲುಗಳಿಗೆ, ತಪ್ಪುಗಳಿಗೆ, ಬೇರೆಯವರ ಕಡೆ ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ನಮ್ಮ ಆಟವನ್ನು ಸರಿಯಾಗಿ ಚಾಣಾಕ್ಷತನದಿಂದ ಆಡುವುದನ್ನು ಕಲಿಯೋಣ. ಜೊತೆಗೆ ಒಮ್ಮೆ ಕೆಳಗೆ ಎಸೆದ ಎಲೆಯನ್ನು ಪುನಃ ತೆಗೆದು ಕೊಳ್ಳಲು ಈ ಆಟದಲ್ಲಿ ಸಾಧ್ಯ ಇಲ್ಲ, ಅದ್ದರಿಂದ ಎಸೆದ ಎಲೆಯ ಬಗ್ಗೆ ಯೋಚನೆ ಮಾಡಿ ಕೊರುಗೋ ಬದಲು, ಮುಂದಿನ ಎಲೆಯನ್ನು ಎಚ್ಚರದಿಂದ ನಡೆಸುವ ಬಗ್ಗೆ ಯೋಚನೆ ಮಾಡೋಣ.

ನಿಮ್ಮೆಲ್ಲರ ಜೀವನದ ಆಟಕ್ಕೆ ನನ್ನ ಶುಭಾಕಾಂಕ್ಷಿಗಳು.

ಪ್ರೀತಿಯಿಂದ
ಗೌಡ.

No comments:

Post a Comment