ಹಗಲಿರುಳು ನೆರಳುನಿದ್ದೆಯ ಮೆಟ್ಟಿ, ಹೊಟ್ಟೆಬಟ್ಟೆಯ ಕಟ್ಟಿ,
ಸುಖಸನ್ಮಾನಗಳಿಗಾಶಿಸದೆ, ಜಾತಿಮತಗಳ ಭೇದವೆಣಿಸದೆ
ಜಗದೆಲ್ಲರ ಹಸಿವಾಗ್ನಿಯ ತನ್ನ ಬೆವರಿಂದ ನಂದಿಸುವಾತ
ಪರಮಪೂಜ್ಯ ಶ್ರೀಸಾಮಾನ್ಯನಲ್ಲವೆ? ಈ ಅನ್ನಧಾತ;
ಅನ್ಯಜೀವಿಗಳನ್ಯವೆನ್ನದೆ ಬಳಗದೊಳಕೂಡಿ ಬಾಳೊ ಬುದ್ದ
ಕಲ್ಮಣ್ಣಲೂ, ಗಿಡಮರದಲೂ ಪ್ರತ್ಯಕ್ಷ ದೇವರ ಕಾಣೊ ಸಿದ್ದ
ನೇಗಿಲಕೆಲಸದಿ ಕೈಲಾಸವ ಕಾಣೊ ಕರ್ಮಯೋಗಿ
ಭುವಿಯಲುತ್ತಮ ಧರ್ಮಿಷ್ಠನಲ್ಲವೆ? ಈ ನೇಗಿಲಯೋಗಿ;
ನೇಗಿಲಿಡಿದು ಜೀವಂತ ಚಿತ್ತಾರ ಬಿಡಿಸೊ ಭೂಚಿತ್ರಕಾರ
ನಿಸರ್ಗದ ಮಿಡಿತಕ್ಕನುಸಾರ ಉಸಿರಾಡೊ ಹಾಡುಗಾರ
ಕಸದಿಂರಸವ, ಮಣ್ಣಿಂದನ್ನವ ಸೃಷ್ಟಿಸಬಲ್ಲ ಜಾದುಗಾರ
ಗಂಧದೆದೆಯ ಜೀವನಕಲಾವಲ್ಲಭನಲ್ಲವೆ? ಈ ಆರಂಬಕಾರ;
ಹಸಿವಿಗಿಂತ ನರಕಶಿಕ್ಷೆಯಿಲ್ಲ, ಅನ್ನಧಾತನಿಗಿಂತ ಧಾತನಿಲ್ಲ
ಇವನಿಲ್ಲದೆ ಜಗನೆಡೆಯದೊ, ಇವನೆಡೆಗೆ ಭಕ್ತಿ ತೋರೊ;
ಅನ್ನ ನೀಡುವ ಕೈ ಸಣಕಲಾದರೆ, ಜಗವೆ ಬಡಕಲು ತಿಳಿಯೊ
ಇವನಳಿವಲಿ ಮನುಕುಲದಳಿವಡಗಿದೆ, ಇದನರಿತು ಬಾಳೊ;
Math: Jai Ho ಅನ್ನಧಾತ, Jai Ho ಗೌಡ್ರೆ:)
ReplyDeleteThank you very much Math ;)
ReplyDeleteI like it...super... and thanks!
ReplyDelete@Shami - Thanks for liking.. but why you are saying thanks?
ReplyDeleteಅದ್ಭುತ ಕವನ ಗೌಡ್ರೆ.. super like!!
ReplyDelete@Girish: Thanks a lot
ReplyDeleteತೋಟೇಗೌಡರೇ...ಅನ್ನದಾತನ ಸ್ಟ್ರಾಂಗ್ ಸಪೋರ್ಟರ್ ನಾನು ಸಹಾ...ಅನ್ನ ನೀಡೋ ಎಷ್ಟೋ ಜೀವಗಳು ಸಾಲದಹೊರೆಯಲ್ಲಿ ಒದ್ದಾಡುವುದು ನಿಜಕ್ಕೂ ಶೋಚನೀಯ...
ReplyDeleteಚನ್ನಾಗಿದೆ ಕವನ..
ಧನ್ಯವಾದಗಳು ಜಲನಯನ ;)
ReplyDelete