ಸಂಧರ್ಬ : SFO Airport ನಲ್ಲಿ ಒಬ್ಬ ಹುಡುಗ ತನ್ನ ಗೆಳತಿಯನ್ನ ಎಲ್ಲಿಗೋ (ತವರಿಗೆ?) ಕಳಿಸಲು ಬಂದು ವಿದಾಯ ಹೇಳುತಿದ್ದಾಗ... ನಾನು ಕಂಡ ಆ ಜೋಡಿಯ ಭಾವನೆಗಳನ್ನು, ನನ್ನ ಕಲ್ಪನೆಯ ಕಣ್ಣಿನ ಕ್ಯಾಮೆರಾದಿಂದ ಈ ಕವಿತೆಯ ರೂಪದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ.
ಪ್ರೀತಿಯ ಮಹಾಸಾಗರದ ನಡುವೆ
ಅಗಲಿಕೆಯ ಮರುಭೂಮಿ ಕಂಡ
ಹೃದಯ ಹೆದರಿ ನಡುಗುತಿದೆ
ವಿರಹದ ಬಿರುಗಾಳಿಗೆ ಸಿಗುವ ಭಯದಲಿ
ಮನವು ದಿಕ್ಕಾಪಾಲಾಗಿ ಓಡುತಿದೆ
ನೀನಿಲ್ಲದೆ ನನ್ನ ಈ ಬಾಳಿನ ಪಯಣ
ಒಂದು ಹೆಜ್ಜೆಯೂ ಮುಂದೆ ಸಾಗದು
ಬಾ ಬಿಗಿಯಾಗಿ ಅಪ್ಪಿಕೋ, ಹೊರಡುವ ಮುನ್ನ
ಈ ದೇಹದಿಂದ ಚೇತನ ಜಾರುವ ಮುನ್ನ
ತುಟಿಗಳಿಗೊಮ್ಮೆ ಸಿಹಿಯಾದ ಮುತ್ತಿಡು, ತೆರಳುವ ಮುನ್ನ
ನನ್ನಲ್ಲಿ ಉತ್ಸಾಹದ ಚಿಲುಮೆ ಬತ್ತುವ ಮುನ್ನ
ಪ್ರೀತಿಯ ಎರಡು ಮಾತಾಡು, ಅಗಲುವ ಮುನ್ನ
ನನ್ನ ಒಲವಿನ ಸ್ವರಪೆಟ್ಟಿಗೆ ಚೂರಾಗುವ ಮುನ್ನ
ನೀನಿಲ್ಲದೆ ನಾನು, ರೆಕ್ಕೆ ಇಲ್ಲದ ಹಕ್ಕಿ,
ಹೂಗಳೇ ಇಲ್ಲದ ತೋಟದ ದುಂಬಿ
ಉಸಿರೇ ಬಾರದು ಹೇಳಲು,
ಹೋಗಿ ಬಾ ಗೆಳತಿ ಎಂದೂ
ಹೋಗಿ ಬಾ ಗೆಳತಿ ಎಂದೂ
ಆದರೂ ಹೇಳದೆ ವಿಧಿಯಿಲ್ಲ
ಬೇಗ ಮರಳಿ ಬಾ ಗೆಳತಿ,
ಕಾಯುವೆ ಒಂದೇ ಉಸಿರಲಿ
ನೀರಿಗಾಗಿ ಒದ್ದಾಡುವ ಮೀನಾಗಿ
ಕಾಯುವೆ ಒಂದೇ ಉಸಿರಲಿ
ನೀರಿಗಾಗಿ ಒದ್ದಾಡುವ ಮೀನಾಗಿ
I wish u the same thing happens to u very soon...
ReplyDeleteabba.. entaha viraha vedane.. idu nijavagiyu bereyavara kathene.. athava.. swanta anubhavana?? :P
ReplyDeleteEne irali.. kavite chennagide.. hige bardu ond pustakana bidugade madi.. jnanapitha prashasti bandru barbohodu... :) ;)
tumba chennagide..
ReplyDeletelike pady said, looks like its your own feelings put to words when departing from there ;)
good to read ur posts.. keep it going
ಭಲೇ ತೋಟೆ ಭಲೇ.. ಮೆಚ್ಚಿದೆ ನಿನ್ನನ್ನ... ಸಾಫ್ಟ್ ವರ್ ರಂಗದ ರೋಮಾಂಟಿಕ್ ಕವಿ ಎಂದರೆ ನಮ್ಮ ಗೌಡ್ರೇ...
ReplyDelete