Monday, January 4, 2010

ಹನಿಗವನಗಳು

ಕಾಯಕವೇ ಕೈಲಾಸ
ಎಂದು ನಂಬಿದರೆ ಕೈ ಲಾಸೇ


ಇಂದು ತಡೆದುಕೊಳ್ಳಲಾರದೆ ಚಟ,

ಕುಡಿದರೆ ಸಾರಾಯಿ.

ನಾಳೆ ತಡೆಯಲು ಚಟ್ಟ ,

ಕುಡಿಯಬೇಕಾಗುತ್ತದೆ ದವಾಯಿ

ಕೆಲವರು ದುಡಿಯುತ್ತಾರೆ
ಜಾಬ್ ತೃಪ್ತಿಗೆ
ಮತ್ತೆ ಕೆಲವರು
ಜೇಬ್ ತೃಪ್ತಿಗೆ


ಹಿಂದೆ ಪ್ರೀತಿ ಮಾಡಿದರೆ

ಹೋಗುತಿತ್ತು ಪ್ರಾಣ

ಇಂದು ಪ್ರೀತಿ ಮಾಡಿದರೆ

ಹೋಗುತ್ತೆ ತ್ರಾಣ

ಹಿಂದೆ ಹಿರಿಯರು ಹೇಳುತಿದ್ದರು
ಉಬ್ಬು ತಗ್ಗುಗಳನ್ನು ನೋಡಿ
ನಡೆದರೆ ಬೀಳುವುದಿಲ್ಲ ಹಳ್ಳಕ್ಕೆ,
ಆದರೆ ಇಂದು ನಾವು ಅವುಗಳನ್ನೇ
ನೋಡಿ ಬೀಳುತ್ತೇವೆ ಹಳ್ಳಕ್ಕೆ


ಮದುವೆಯ ಮೊದಲು

ಪ್ರತಿಯೊಬ್ಬ ಹುಡುಗನು ಕವಿ

ಮದುವೆಯ ನಂತರ

ಅವನಿಗೆಂದೂ ಕೇಳಿಸದು ಕಿವಿ

ಮಾಡಿರುವೆಯೊಂದು ಸಂಕಲ್ಪ
ಹೊಸ ವರುಷಕೆ
ಮಾಡದಿರಲು ಯಾವುದೇ ಸಂಕಲ್ಪ
ಈ ವರುಷಕೆ

5 comments:

  1. I really liked this one... :) :)

    ಹಿಂದೆ ಹಿರಿಯರು ಹೇಳುತಿದ್ದರು
    ಉಬ್ಬು ತಗ್ಗುಗಳನ್ನು ನೋಡಿ
    ನಡೆದರೆ ಬೀಳುವುದಿಲ್ಲ ಹಳ್ಳಕ್ಕೆ,
    ಆದರೆ ಇಂದು ನಾವು ಅವುಗಳನ್ನೇ
    ನೋಡಿ ಬೀಳುತ್ತೇವೆ ಹಳ್ಳಕ್ಕೆ

    waw waw Gowdre, nima mistishkadalli ellellinda intaha khatarnak ideas barutade??

    ReplyDelete
  2. sankalpa maadadiruva sankalpa chennagide... very good. keep moving...

    ReplyDelete